‘ಮರುನಾಮಕರಣ, ದೇಶದ ಬಹುತ್ವವನ್ನು ಅಳಿಸಿ ಹಾಕುತ್ತದೆ’ (ಪ್ರ.ವಾ., ಸಂಪಾದಕೀಯ, ನ. 9) ಎಂಬ ಬರಹಕ್ಕೆ ಈ ಪ್ರತಿಕ್ರಿಯೆ. ವಾಸ್ತವದಲ್ಲಿ ಮರುನಾಮಕರಣವು ಬಹುತ್ವವನ್ನು ಅಳಿಸಿ ಹಾಕುವುದಿಲ್ಲ, ಬದಲಾಗಿ ದೇಶದ ಜನರಿಗೆ ತಮ್ಮತನದ ಪರಿಚಯ ಮಾಡಿಸುತ್ತದೆ.
Bangalore - ಬೆಂಗಳೂರು ಆಗಿದ್ದು ಅಥವಾ ಮದ್ರಾಸ್– ಚೆನೈ ಎಂದು ಬದಲಾಗಿದ್ದು ಇದಕ್ಕೆ ಉತ್ತಮ ಉದಾಹರಣೆ. ಬ್ರಿಟಿಷರು, ಮೊಘಲರು ಮುಂತಾದವರು ಭಾರತದ ಮೇಲೆ ದಾಳಿ ಮಾಡಿರದಿದ್ದರೆ ಬಹುಶಃ ಮರುನಾಮಕರಣ ಮಾಡುವ ಸನ್ನಿವೇಶವೇ ಇರುತ್ತಿರಲಿಲ್ಲ!