ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯಲ್ಲಿ ಇತ್ತೀಚೆಗೆ ಮೆರವಣಿಗೆ ಹೊರಟಿದ್ದ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಯುವಕನೊಬ್ಬ ಪೊಲೀಸರ ಮುಂದೆಯೇ ಗುಂಡು ಹಾರಿಸಿ, ವಿದ್ಯಾರ್ಥಿಯೊಬ್ಬನನ್ನು ಗಾಯಗೊಳಿಸಿದ ಸುದ್ದಿ (ಪ್ರ.ವಾ., ಜ. 31) ಓದಿ ಆಘಾತವಾಯಿತು. ಇದಕ್ಕೆ ಪ್ರಭುತ್ವದ ಕುಮ್ಮಕ್ಕಿದೆಯೇ ಎನ್ನುವ ಅನುಮಾನ ಕಾಡಿತು. ‘ಸ್ವಾತಂತ್ರ್ಯ ಕೊಡುತ್ತೇನೆ’ ಎಂಬ ಸಂದೇಶದೊಂದಿಗೆ ಪ್ರತಿಭಟನಾನಿರತರ ಮೇಲೆ ಗುಂಡು ಹಾರಿಸಿದ ಆತನ ಮನಃಸ್ಥಿತಿಯು ಗಾಂಧೀಜಿಯ ಅಹಿಂಸಾ ತತ್ವವನ್ನು ಅಣಕಿಸುವಂತಿದೆ.