ಆ ಮತದಾನ ಕೇಂದ್ರದಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಯನ್ನು ಹೋಲುವ ಯಾವುದೇ ತರಹದ ಚಿತ್ರಗಳು ಇರಬಾರದೆಂಬ ನಿಯಮವಿದೆ. ಆದರೆ ಮಹಾತ್ಮ ಗಾಂಧಿ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಸುಭಾಷ್ಚಂದ್ರ ಬೋಸ್, ಬಸವಣ್ಣ, ಕಿತ್ತೂರುರಾಣಿ ಚೆನ್ನಮ್ಮ ಮುಂತಾದವರ ಭಾವಚಿತ್ರಗಳ ಮೇಲೆ ಪೇಪರ್ ಅಂಟಿಸಲು ಮೇಲಧಿಕಾರಿಗಳು ಸೂಚಿಸುತ್ತಾರೆ. ಇದು ಎಷ್ಟು ಸರಿ? ಚಿಹ್ನೆ ಸೂಚಿಸುವ ಗುರುತು ಇರಬಾರದೆಂಬ ಕಾರಣಕ್ಕೆ ಒಮ್ಮೆ ಫ್ಯಾನನ್ನೇ ಬಿಚ್ಚಿಸಿ ಇಡಲಾಗಿತ್ತು!