ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವರಿಲ್ಲ ಎನ್ನುವುದು ದಾರ್ಷ್ಟ್ಯದ  ಮಾತಾಗುತ್ತದೆ’ | ಎಲ್ಲಿಗೆಲ್ಲಿಯ ಸಂಬಂಧ?

Last Updated 30 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

‘ದೇವರಿಲ್ಲ ಎನ್ನುವುದು ದಾರ್ಷ್ಟ್ಯದ ಮಾತಾಗುತ್ತದೆ’ ಎಂದು ಹಿರಿಯರೂ, ಪ್ರಾಜ್ಞರೂ ಆದ
ಎಸ್.ಎಲ್.ಭೈರಪ್ಪನವರು ಈ ಸಲದ ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಹೇಳಿದ್ದಾರೆ (ಪ್ರ.ವಾ., ಸೆ. 30). ದೇವರ ಅಸ್ತಿತ್ವವನ್ನು ಒಪ್ಪುವುದು, ಬಿಡುವುದು ಅವರವರ ವಿವೇಚನೆಗೆ ಬಿಟ್ಟ ವಿಷಯ. ಸಾಮಾನ್ಯರನ್ನು ಬಿಡಿ, ಶಿವರಾಮ ಕಾರಂತ, ಎ.ಎನ್.ಮೂರ್ತಿರಾವ್ ಮತ್ತು ಗೌರೀಶ ಕಾಯ್ಕಿಣಿ ಅಂಥವರೂ ದೇವರಿಲ್ಲ ಎಂದು ದೃಢವಾಗಿ ನಂಬಿದ್ದರು. ಆದರೂ ಅತ್ಯಂತ ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ಬಾಳನ್ನು ಬಾಳಿ, ಕನ್ನಡ ಜನಮಾನಸದಲ್ಲಿ ಪ್ರೀತಿಯ ಸ್ಥಾನವನ್ನು ಗಳಿಸಿದ್ದಾರೆ. ದೇವರಿದ್ದಾನೆ ಅಥವಾ ಇಲ್ಲ ಎಂದು ಹೇಳುವುದಕ್ಕೂ ದಾರ್ಷ್ಟ್ಯತನಕ್ಕೂ ಎಲ್ಲಿಯ ಸಂಬಂಧ?

–ಪ್ರಾಣೇಶ ಗುಡಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT