ಉಳಿದವರು, ‘ಹೋಗಲಿ ಬಿಡಮ್ಮ’, ‘ಸುಮ್ನಿರಮ್ಮ’ ಎಂದು ಆಕೆಯ ಬಾಯಿಯನ್ನು ಮುಚ್ಚಿಸಿದರೇ ಹೊರತು, ಕಳ್ಳಬೆಕ್ಕಿನಂತಹ ಖೂಳನಿಗೆ ಏನೂ ಹೇಳಲಿಲ್ಲ. ಅವನು ಆಗಲೂ ನಿದ್ರೆಯನ್ನೇ ನಟಿಸುತ್ತಿದ್ದ! ನಾವು ಎಂತಹ ಸಮಾಜದಲ್ಲಿ ಇದ್ದೇವೆ? ನಮ್ಮ ಮಕ್ಕಳಿಗೆ ಎಷ್ಟು ಸುರಕ್ಷಿತವಾದ ಸಮಾಜವನ್ನು ನಿರ್ಮಿಸುತ್ತಿದ್ದೇವೆ? ದೌರ್ಜನ್ಯವನ್ನು ಖಂಡಿಸಬೇಕಾದ ಶ್ರೀಸಾಮಾನ್ಯರ ಧ್ವನಿಗಳು ಎಲ್ಲಿ ಸತ್ತಿವೆ? ವಿದ್ಯಾರ್ಥಿನಿಯನ್ನು ಕಂಡಕ್ಟರ್ ಹೊರದಬ್ಬಿದಾಗ ಉಳಿದ ಪ್ರಯಾಣಿಕರಾಗಲೀ ಚಾಲಕನಾಗಲೀ ಅದನ್ನು ವಿರೋಧಿಸಲಿಲ್ಲವೇಕೆ ಎಂದು
ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ.