ಅಖಿಲ ಭಾರತ86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸಲು ತೀರ್ಮಾನಿಸಿರುವುದು ಸ್ವಾಗತಾರ್ಹ. ಅಖಂಡ ಕರ್ನಾಟಕದ ಮಧ್ಯಭಾಗದಲ್ಲಿ ಇರುವ ಹಾವೇರಿ, ರಾಜ್ಯದ ವಿವಿಧ ಭಾಗಗಳಿಂದ ಬರುವ ಸಾಹಿತ್ಯಪ್ರೇಮಿಗಳಿಗೆ ಅನುಕೂಲಕರವಾದ ಸ್ಥಳ. ಮೇಲಾಗಿ ಈ ಜಿಲ್ಲೆಯು ಕವಿ ಸರ್ವಜ್ಞ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ.ಗೋಕಾಕ, ಸಂತಶಿಶುನಾಳ ಶರೀಷ, ಗಳಗನಾಥ, ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವ ಹೀಗೆ ಸಾಲು ಸಾಲು ಪುಣ್ಯವಂತರಿಗೆ ಜನ್ಮ ನೀಡಿದ ನೆಲ. ಇಲ್ಲಿ ಸಮ್ಮೇಳನದ ವಿವಿಧ ಗೋಷ್ಠಿಗಳು ನಡೆಯುವಾಗ, ಈ ನೆಲದ ಗಣ್ಯರನ್ನು ಸ್ಮರಿಸಲು ಮತ್ತೊಂದು ಅವಕಾಶ ದೊರೆಯುತ್ತದೆ ಮತ್ತು ಅಖಂಡ ಕರ್ನಾಟಕದ ಬೇರು ಮತ್ತಷ್ಟು ಆಳಕ್ಕೆ ಇಳಿಯುತ್ತದೆ.