ಇದೀಗ ಇಡೀ ಪ್ರಪಂಚದಲ್ಲಿ ಜನಸಮುದಾಯದ ಬದುಕು ಅಸ್ತವ್ಯಸ್ತಗೊಂಡು, ಅಪಾರ ಸಂಖ್ಯೆಯ ಸಾವು ನೋವಿಗೆ ಕಾರಣವಾಗುತ್ತಿರುವುದು, ಪ್ರಕೃತಿಯ ಜೀವಿಗಳ ಒಡಲಿನಿಂದ ಹುಟ್ಟಿ ಬಂದಿರುವ ಕೊರೊನಾ ಎಂಬ ಅಣು. ಈ ಸಂದರ್ಭದಲ್ಲಿ ಉಂಟಾಗಿರುವ ಸಾವಿರಾರು ಬಗೆಯ ಸಮಸ್ಯೆಗಳಿಗೆ ಮಾನವರೇ ಪರಿಹಾರ ಕಂಡುಕೊಳ್ಳಲು ಹೆಣಗುತ್ತಿದ್ದಾರೆ. ಈ ವಾಸ್ತವವನ್ನು ನಾವು ಅರಿತರೆ, ಮಾನವ ಸಮುದಾಯದ ಬದುಕಿನ ಏರಿಳಿತಗಳಿಗೆ ಪ್ರಕೃತಿ ಮತ್ತು ಮಾನವರ ನಡೆನುಡಿಗಳು ಮುಖ್ಯವೇ ಹೊರತು, ದೇವರ ಪಾತ್ರವೇನಿಲ್ಲ ಎಂಬುದು ಮನದಟ್ಟಾಗುತ್ತದೆ.