ಇದೇ ರೀತಿಯ ಸಮಸ್ಯೆಗಳನ್ನು ಅನೇಕ ಗ್ರಾಮಗಳು ಎದುರಿಸುತ್ತಿವೆ. ಸರ್ಕಾರದ ಯೋಜನೆಗಳು, ಸೌಲಭ್ಯಗಳನ್ನು ಗ್ರಾಮಗಳಿಗೆ ತಲುಪಿಸಿ, ಸಮಸ್ಯೆಗೆ ಪರಿಹಾರ ದೊರಕಿಸುವ ಕಾರ್ಯವನ್ನು ಆಯಾ ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸುವಂತೆ ಆಗಬೇಕು. ಆಗ ಈ ಎಲ್ಲ ಗ್ರಾಮಗಳ ಜನರೂ ಕಾರಜೋಳ ಗ್ರಾಮಸ್ಥರಂತೆ ನೆಮ್ಮದಿಯಿಂದ ಬದುಕಲು ಸಾಧ್ಯ.
-ಬಿ.ಎಸ್.ಚೈತ್ರ, ಚಿತ್ರದುರ್ಗ