ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ನಿಂದನೆ ಸಲ್ಲದು

ಅಕ್ಷರ ಗಾತ್ರ

ಮಧುಗಿರಿಯ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಬಗ್ಗೆ ಹಗುರವಾಗಿ ಮಾತನಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕೆಲವರಿಗೆ ಅದೊಂದು ಖಯಾಲಿ. ಮೈಕು ಕಂಡ ತಕ್ಷಣ ಉದ್ರೇಕಗೊಂಡು ನಾಲಗೆಯನ್ನು ಎತ್ತ ಬೇಕಾದರೂ ಹೊರಳಿಸಿಬಿಡುತ್ತಾರೆ. ಅವರ ಬೆಂಗಲಿಗರು ಅಂತಹ ಮಾತಿಗೆ ಚಪ್ಪಾಳೆ ಮತ್ತು ಶಿಳ್ಳೆ ಹೊಡೆದರಂತೂ ಮತ್ತೂ ಹಿಗ್ಗಿ ಹೋಗುತ್ತಾರೆ. ದೊಡ್ಡವರ ಬಗ್ಗೆ ಮಾತನಾಡಿದಾಗ ತಾವೂ ಪ್ರಸಿದ್ಧಿ ಪಡೆಯುತ್ತೇವೆ ಎಂಬ ಹುಂಬತನ ಕೆಲವರದು. ಯಾರೇ ಆಗಲಿ ವೈಯಕ್ತಿಕ ನಿಂದನೆ ಸಲ್ಲದು.

- ಮಲ್ಲತ್ತಹಳ್ಳಿ ಡಾ. ಎಚ್. ತುಕಾರಾಂ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT