ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಸರ್ಕಾರಗಳನ್ನು ಉರುಳಿಸುವ ಆಟದಲ್ಲಿ ಬಿಜೆಪಿ ತೊಡಗಿದೆ. ಇದು, ಅತಿ ಎನಿಸುವ ಮಟ್ಟಿಗೆ ಹೋಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರು, ಚುನಾವಣೆಯಲ್ಲಿ ಜನ ತಮ್ಮ ಪಕ್ಷವನ್ನು ಬಹುಮತದಿಂದ ಆರಿಸಿಯೇ ಬಿಟ್ಟಿದ್ದಾರೆ ಎಂದು ಭ್ರಮಿಸಿ, ಮುಖ್ಯಮಂತ್ರಿಯ ಕುರ್ಚಿಗಾಗಿ ‘ಶೀತಲ ಸಮರ’ದಲ್ಲಿ ಮಗ್ನರಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ಗೆ ಇದರ ಪರಿವೆಯೇ ಇದ್ದಂತಿಲ್ಲ. 23 ಮಂದಿಯ ಭಿನ್ನಮತೀಯರ ಗುಂಪು ನಿತ್ರಾಣವಾದ ನಂತರ, ‘ಪಿತ್ರಾರ್ಜಿತ ಆಸ್ತಿಯಾದ ಕಾಂಗ್ರೆಸ್ ನಮ್ಮ ಹಿಡಿತಕ್ಕೇ ದಕ್ಕಿದೆ’ ಎಂದು ನಿರುಮ್ಮಳವಾಗಿ ಇದೆ.