ಹೋದ ವರ್ಷ ಕರ್ನಾಟಕದ ಕರಕುಶಲ ವಸ್ತುಗಳ ಸೊಗಡಿನ ಸ್ತಬ್ಧಚಿತ್ರ ಎರಡನೇ ಬಹುಮಾನ ಪಡೆದಿತ್ತು ಎಂಬುದು ನಮ್ಮ ಹೆಮ್ಮೆಯ ಸಂಗತಿ. ರೋಸ್ಟರ್ ಪದ್ಧತಿ ಮೂಲಕ ಆಯ್ಕೆ ಮಾಡುತ್ತಿರುವುದರಿಂದ ಎಲ್ಲಾ ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಅವಕಾಶ ಸಿಗುತ್ತಿಲ್ಲ. ಈ ಪದ್ಧತಿ ಬಿಟ್ಟು ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೂ ಅವಕಾಶ ನೀಡಬೇಕು. ಅಂದಾಗ ಸಮಗ್ರತೆ, ಒಕ್ಕೂಟ ವ್ಯವಸ್ಥೆಗೆ ಮತ್ತಷ್ಟು ಕಳೆ ಬರಲಿದೆ.