‘...ಆತ್ಮಸಾಕ್ಷಿಯ ಪಿಸುಮಾತು’ (ಸಂಗತ, ಏ. 5) ಎಂಬ ಡಾ. ಜ್ಯೋತಿ ಅವರ ಲೇಖನ ಅರ್ಥಪೂರ್ಣವಾಗಿದೆ. ಇಂದು ಆತ್ಮಸಾಕ್ಷಿಯನ್ನು ಗಾಳಿಗೆ ತೂರಿದವರೇ ಹೆಚ್ಚು ಮಂದಿ. ಹಲವರು ಅದರ ಪಿಸುಮಾತನ್ನು ಕೇಳಿಸಿಕೊಳ್ಳದ ಜಾಣಕಿವುಡರಾಗಿದ್ದಾರೆ. ಯಾವುದಾದರೂ ವಿಷಯದಲ್ಲಿ ಸಂದೇಹ ಉಂಟಾದಾಗ, ತನ್ನ ಅಂತರಂಗದ ಪಿಸುಮಾತೇ ಪ್ರಮಾಣವೆಂದು ಕಾಳಿದಾಸನು ‘ಶಾಕುಂತಲ’ ನಾಟಕದಲ್ಲಿ ಹೇಳಿರುವುದು ಮನನೀಯವಾಗಿದೆ. ಹಾಗೆ ನೋಡಿದರೆ ಈಗಲೂ ಹಳ್ಳಿಗಳಲ್ಲಿ ಕಡುಬಡವರು, ದೈವದ ಬಗ್ಗೆ ಹೆದರುವವರು ಈ ಆತ್ಮಸಾಕ್ಷಿಯ ಪಿಸುಮಾತಿಗೆ ಓಗೊಡುತ್ತಿದ್ದಾರೆ ಎಂಬುದು ಸ್ವಲ್ಪಮಟ್ಟಿಗೆ ಸಮಾಧಾನದ ಸಂಗತಿ.