ಈ ಸನ್ನಿವೇಶವನ್ನು ತೋಟಗಾರಿಕೆ ಇಲಾಖೆಯು ರೈತರ ಹಿತರಕ್ಷಣೆಗೆ ಬಳಸಿಕೊಳ್ಳಬೇಕು. ಗ್ರಾಹಕಸ್ನೇಹಿ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಆಯ್ದ ಬಡಾವಣೆಗಳಲ್ಲಿ ನೇರವಾಗಿ ಗ್ರಾಹಕರಿಗೆ ತಲುಪುವಂತೆ ಕೂಡಲೇ ಹಣ್ಣು, ತರಕಾರಿಗಳನ್ನು ಸರಬರಾಜು ಮಾಡಬಹುದಾಗಿದೆ. ತನ್ನ ಮಾರಾಟ ಮಳಿಗೆಗಳಲ್ಲಿ ಪೊಲೀಸ್ ಮತ್ತು ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಸಮಯವನ್ನು ನಿಗದಿಪಡಿಸಿ, ರೈತರ ವ್ಯವಸಾಯೋತ್ಪನ್ನಗಳನ್ನು ಮಾರಾಟ ಮಾಡುವುದರಿಂದ ರೈತರು, ಗ್ರಾಹಕರು ಹಾಗೂ ಇಲಾಖೆಗೆ ಒಳ್ಳೆಯ ಲಾಭ ಬರುವುದರಲ್ಲಿ ಸಂದೇಹವಿಲ್ಲ.