ಕೊರೊನಾಗೆ ಸಂಬಂಧಿಸಿದ ದಿಗ್ಬಂಧನದಿಂದಾಗಿ, ದಿನಸಿ ಮತ್ತಿತರ ಪದಾರ್ಥಗಳ ಸಾಗಣೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡು ಸ್ವಲ್ಪಮಟ್ಟಿನ ಕೊರತೆ ಉಂಟಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇದು ಖಂಡಿತ ಸಹಜ ಸ್ಥಿತಿಗೆ ಮರಳುವುದರಲ್ಲಿ ಅನುಮಾನ ಇಲ್ಲ. ಆದರೆ ಈ ಸಣ್ಣ ಕೊರತೆಯ ಕಾರಣ ಮುಂದಿಟ್ಟುಕೊಂಡು, ವರ್ತಕರು ಪದಾರ್ಥಗಳ ಬೆಲೆ ಏರಿಸುವುದು ಸರಿಯಲ್ಲ.