ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ನನ್ನ ಮಗ ಗುರುವಾರ ಬೆಳಿಗ್ಗೆ ಫೋನ್ ಮಾಡಿ, ‘ಈ ತಿಂಗಳಿಂದ ಆರು ತಿಂಗಳವರೆಗೆ ಸಂಬಳದಲ್ಲಿ ಶೇ 20ರಷ್ಟು ಕಡಿತ ಮಾಡ್ತಾರಂತೆ’ ಎಂದು ತಿಳಿಸಿದ. ನನ್ನದು ಸ್ವಂತ ಉದ್ಯೋಗ. ಈಗ ಮನೆಯೇ ಮಂತ್ರಾಲಯವಾಗಿದೆ. ಬ್ಯಾಂಕಿನಲ್ಲಿದ್ದ ಹಣದಲ್ಲಿ ಮನೆಸಾಮಾನು, ಹಣ್ಣು, ತರಕಾರಿಗೆಂದು ಒಂದಿಷ್ಟು ಖರ್ಚಾಗಿದೆ. ದುಡಿಮೆ ಇಲ್ಲದೇ ಖರ್ಚು ಮಾಡುವುದಾದರೂ ಹೇಗೆ? ಯಾವುದೂ ಆದಾಯವಿಲ್ಲದಿದ್ದರೆ ಮುಂದೇನು ಮಾಡುವುದು ಎಂದು ನನ್ನ ಹೆಂಡತಿಯೂ ಪ್ರಶ್ನಿಸಿದಳು. ಮನೆಯಲ್ಲಿ ಒಟ್ಟಾಗಿ ಇದ್ದುದರ ಫಲವಾಗಿ ಈ ಮಾತು ಕೇಳಬೇಕಾಗಿ ಬಂತು!