ಇಷ್ಟು ದಿನ ಕಂದಾಯ ಅಧಿಕಾರಿಗಳ ಲಂಚದ ರಗಳೆ ಹೆಚ್ಚು ಪ್ರಚಾರಕ್ಕೆ ಬರುತ್ತಿತ್ತು. ಈಗ ಉನ್ನತ ಹುದ್ದೆಯಲ್ಲಿರುವ ಪೊಲೀಸ್ ಅಧಿಕಾರಿಗಳ ಲಂಚಾವತಾರವು ಸುದ್ದಿಯ ಕೇಂದ್ರಬಿಂದುವಾಗಿದೆ. ಇಂತಹ ಪೊಲೀಸ್ ಅಧಿಕಾರಿಗಳಿಗೆ ಮಾಸ್ಟರ್ ಹಿರಣ್ಣಯ್ಯ ಈ ಹಿಂದೆಯೇ ಅನೇಕ ಬಾರಿ ಮೊನಚು ಮಾತುಗಳಿಂದ ಛೀಮಾರಿ ಹಾಕಿದ್ದರು. ಆದರೆ, ಈಗಿನ ಭೀಕರ ಕೊರೊನಾ ಸಮಯದಲ್ಲೂ ಇಂತಹ ಪ್ರಕರಣಗಳು ನಡೆದಿರುವುದು ವಿಷಾದನೀಯ.