ವಿಶೇಷ ಆರ್ಥಿಕ ಪ್ಯಾಕೇಜ್ನ ಅಡಿ ವಾಹನ ಚಾಲಕರ ಖಾತೆಗೆ ತಲಾ ₹ 3 ಸಾವಿರ ಹಾಕುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಸರಿಯಾದ ಖಾತೆದಾರರನ್ನು ಹುಡುಕಿ ಅವರ ಖಾತೆಗೆ ಹಣ ಹಾಕುವುದಾಗಿ ಸರ್ಕಾರ ಹೇಳಿದ್ದರೂ ಆ ಹಣ ಫಲಾನುಭವಿಗಳನ್ನು ತಲುಪದೇ ಇರುವ ಸಾಧ್ಯತೆಯೇ ಹೆಚ್ಚು. ವಾಹನ ಒಬ್ಬರದಾದರೆ ಅದರ ಚಾಲಕ ಬೇರೆಯಾಗಿರುತ್ತಾರೆ. ಹಾಗಾಗಿ ವಾಹನದ ನೋಂದಣಿ ಮೂಲಕ ಹಣದ ಬಟವಾಡೆ ಮಾಡಿದರೆ ಅದು ಚಾಲಕರ ಬದಲಿಗೆ ವಾಹನ ಮಾಲೀಕರ ಖಾತೆಗೆ ಜಮೆಯಾಗುತ್ತದೆ. ಆದ್ದರಿಂದ ಸರಿಯಾಗಿ ಪರೀಕ್ಷಿಸಿ ಜಮಾ ಮಾಡುವುದು ಒಳ್ಳೆಯದು. ಈ ಕಾರ್ಯದ ಪರಿಶೀಲನೆಗೆ ದಕ್ಷ ಅಧಿಕಾರಿಗಳನ್ನು ನಿಯೋಜಿಸಿದರೆ ಯೋಜನೆಯ ಫಲ ಸಿಗಬೇಕಾದವರಿಗೆ ಸಿಕ್ಕೀತು.