ಕೋವಿಡ್ ಲಸಿಕೆ ಕುರಿತ ಲೇಖನದಲ್ಲಿ (ಪ್ರ.ವಾ., ಡಿ. 4) ಪ್ರೊ. ಶ್ರೀಲತಾ ರಾವ್ ಶೇಷಾದ್ರಿ ಅವರು, ಗುಂಪು ನಿರೋಧಕತೆ ಸಾಧಿಸುವುದು ಅಷ್ಟು ಸುಲಭವಲ್ಲ ಎಂದಿರುವುದು ಸರಿಯಾಗಿದೆ. ಆದರೆ ಕೋವಿಡ್ನ ಭಯವನ್ನು ಲಸಿಕೆಯಿಂದ ಮಾತ್ರವಲ್ಲದೆ ಆತ್ಮಸ್ಥೈರ್ಯ, ಸಕಾರಾತ್ಮಕ ಮನೋಭಾವ, ರೋಗನಿರೋಧಕ ಶಕ್ತಿಯಿಂದಲೂ ಎದುರಿಸಬೇಕಿದೆ. ಎಷ್ಟೋ ಜನ ತಮ್ಮಲ್ಲಿ ರೋಗಲಕ್ಷಣ ಕಂಡರೂ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದಲೂ ಕೋವಿಡ್ ಪ್ರಕರಣಗಳು ಇಳಿಕೆಯಾಗಿರುವಂತೆ ಕಾಣುತ್ತಿರಬಹುದು!