‘ಯುವಜನರು ದೇಶದ ಭವಿಷ್ಯ’ ಎಂದು ರಾಜಕೀಯ ಭಾಷಣಗಳಲ್ಲಿ ಹೇಳುವ ರಾಜಕೀಯ ನಾಯಕರು, ಪ್ರತಿವರ್ಷ ಬಜೆಟ್ನಲ್ಲಿ ಯುವಜನರಿಗೆ, ಅವರ ಆರೋಗ್ಯಕ್ಕೆ ಎಷ್ಟು ಹಣ ಮೀಸಲು ಇಟ್ಟಿದ್ದೇವೆ, ಮೀಸಲು ಇಟ್ಟ ಅಲ್ಪಸ್ವಲ್ಪ ಹಣವನ್ನು ಎಷ್ಟರಮಟ್ಟಿಗೆ ಬಳಸಿದ್ದೇವೆ, ಹೇಗೆ ಬಳಸಿದ್ದೇವೆ ಎನ್ನುವುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಲಸಿಕೆ ವಿತರಣೆಯಲ್ಲಿನ ವಯಸ್ಸಿನ ತಾರತಮ್ಯ ಮತ್ತು ಯುವಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಎಂಬ ತಾತ್ಸಾರ ಮನೋಭಾವವೇ ಇಂದಿನ ಈ ಪರಿಸ್ಥಿತಿಗೆ ಕಾರಣ. ಇನ್ನು ಮುಂದೆಯಾದರೂ ಈ ಮನೋಭಾವ ಬದಲಾಗಲಿ. ಯುವಜನರ ಅಭಿವೃದ್ಧಿಗೆ, ಅವರ ಆರೋಗ್ಯದ ರಕ್ಷಣೆಗೆ ಹೆಚ್ಚು ಗಮನ ಮತ್ತು ಅನುದಾನ ನೀಡಲಿ.