ಬೆಂಗಳೂರಿನಲ್ಲಿ ಹೆತ್ತ ತಂದೆಯನ್ನು ಮಗಳೇ ತನ್ನ ಪ್ರಿಯಕರನ ಜೊತೆ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ ಎನ್ನಲಾದ ಘಟನೆ ಸಮಾಜದ ಸ್ವಾಸ್ಥ್ಯವನ್ನು ಪ್ರಶ್ನಿಸುವಂತಿದೆ. ಬುದ್ಧಿವಾದ ಹೇಳಿದ ಮಾತ್ರಕ್ಕೆ ಅಪ್ಪನನ್ನೇ ಕೊಲೆ ಮಾಡುವ ಮನಃಸ್ಥಿತಿ ಇಂದಿನ ಮಕ್ಕಳಿಗೆ ಇದೆ ಎಂದಾದರೆ, ಮುಂದಿನ ಸುಸ್ಥಿರ ಸಮಾಜದ ನಿರ್ಮಾಣವಾದರೂ ಹೇಗೆ ಸಾಧ್ಯ? ಕೊಲೆಗೆ ಸಂಚು ರೂಪಿಸುವುದಕ್ಕೆ ಪ್ರೇರಣೆ ಸಿಕ್ಕಿದ್ದಾದರೂ ಹೇಗೆ? ಕೊಲೆಯಂತಹ ಪ್ರಕರಣಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಪದೇಪದೇ ಪ್ರಸಾರ ಮಾಡುತ್ತಲೇ ಇರುವ ಇಂದಿನ ನಮ್ಮ ವಿದ್ಯುನ್ಮಾನ ಮಾಧ್ಯಮಗಳು ಇದಕ್ಕೆ ನೇರ ಹೊಣೆಯಾಗುತ್ತವೆ.