‘ಬೆಳೆ ವಿಮೆಗೆ ಮಧ್ಯವರ್ತಿಗಳ ಕನ್ನ’ (ಪ್ರ.ವಾ., ಜುಲೈ 10) ಓದಿ, ವರ್ಷಗಳ ಹಿಂದೆ ಎಂ.ಎಸ್.ಕೆ.ಪ್ರಭು ಅವರು ಪ್ರಸ್ತಾಪಿಸಿದ್ದ ‘ಒಂದೇ ಎಮ್ಮೆಯನ್ನು ಬ್ಯಾಂಕ್ ಸಾಲದಿಂದ 28 ಜನ ಕೊಂಡ ಗುಂಡಮಾರನಹಳ್ಳಿ ಕತೆ’ಯ (‘ವಿರೋಧ ವಿಲಾಸ’, 1999) ನೆನಪಾಯಿತು. ಅಲ್ಲಿಯ ದಲ್ಲಾಳಿ ₹ 3,000 ಸಾಲ ಕೊಡಿಸಲು ₹ 1,000 ಪಡೆಯುವುದಲ್ಲದೆ, ಎಮ್ಮೆ ಸತ್ತಿದೆ ಎಂದು ಸರ್ಟಿಫಿಕೇಟ್ ಮಾಡಿಸಿ ಕ್ಲೈಮ್ನಲ್ಲೂ ಪಾಲು ಸ್ವೀಕರಿಸುವ ಚಾಣಾಕ್ಷ. ಈಗ ‘ಮೌಲ್ಯ’ಗಳು ಹೆಚ್ಚಿವೆ, ಒಂದೇ ಪ್ರಕರಣದಲ್ಲಿ ಐದು ಲಕ್ಷ ರೂಪಾಯಿ ಸಿಗುವ ಸ್ಥಿತಿ!