ಸಾಕುನಾಯಿಗಳನ್ನು ಪಾರ್ಕಿನ ಒಳಗೆ ಕರೆದುಕೊಂಡು ಬರುವುದನ್ನು ನಿಷೇಧ ಮಾಡಿದರೆ ಪಾರ್ಕಿನ ಹೊರಗೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳು ತ್ಯಾಜ್ಯ ಉಂಟು ಮಾಡುತ್ತವೆ ಅಲ್ಲವೇ? ನಾಯಿ ಮಾಲೀಕರು ಅದನ್ನು ಸ್ವಚ್ಛಗೊಳಿಸಿದರೂ, ಸ್ವಚ್ಛಗೊಳಿಸಿದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಇಲ್ಲ. ಹೀಗಾಗಿ ವೈಜ್ಞಾನಿಕವಾದ ಬಗೆಯಲ್ಲಿ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಕುರಿತು ಅರಿವು ಮೂಡಿಸುವ ಕೆಲಸಗಳಿಗೆ ಆದ್ಯತೆ ಕೊಡಬೇಕು.ಈ ದಿಸೆಯಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚಿಂತನೆ ಮಾಡಲಿ.