ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆಯನ್ನು ಪ್ರಶ್ನಿಸಬೇಕಿದೆ

Last Updated 5 ಡಿಸೆಂಬರ್ 2022, 18:15 IST
ಅಕ್ಷರ ಗಾತ್ರ

ಬೈಕ್ಹಿಂದಿಕ್ಕಿದ ಕಾರಣಕ್ಕೆ ಪ್ರಬಲ ಜಾತಿಗೆ ಸೇರಿದ ಯುವಕರಿಂದ ಹಲ್ಲೆ, ಜಾತಿ ನಿಂದನೆಗೆ ಒಳಗಾದ ಕೋಲಾರ ಜಿಲ್ಲೆಯ ಒಬ್ಬ ದಲಿತ ಯುವಕ ಆತ್ಮಹತ್ಯೆಗೆ ಶರಣಾಗಿದ್ದು ಆಘಾತಕಾರಿ. ಆದರೆ ಈ ಪ್ರಕರಣದಲ್ಲಿ ಮೃತ ಯುವಕನ ಧೈರ್ಯ
ವನ್ನು ಪ್ರಶ್ನಿಸುವುದು ಉಚಿತವಲ್ಲ. ಆ ಯುವಕನಿಗೆ ಆದಂತಹ ಅವಮಾನವನ್ನು ನಮ್ಮಲ್ಲಿನ ಬಹುತೇಕರು ಅನುಭವಿಸಿ ರುವ ಸಾಧ್ಯತೆ ಕಡಿಮೆ. ಆತನ ನೋವು, ಹತಾಶೆಯ ತೀವ್ರತೆಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಹೀಗಿರುವಾಗ ಆತ ಹೆದರಿದನೆಂದು ಭಾವಿಸುವುದು ಸರಿಯಲ್ಲ. ಮೃತ ಯುವಕ ಧೈರ್ಯವಂತ ಆಗಿದ್ದಿರಬಹುದು ಅಥವಾ
ಆಗಿಲ್ಲದೆಯೂ ಇರಬಹುದು. ಗೌರವಯುತವಾಗಿ ಬದುಕುವುದು ಆತನ ಹಕ್ಕಾಗಿತ್ತು. ಆ ಹಕ್ಕನ್ನು ಕಸಿದುಕೊಂಡಿದ್ದು ನಮ್ಮ ಸಮಾಜ. ದೂಷಿಸಬೇಕಿರುವುದು ನಮ್ಮ ಸಮಾಜವನ್ನೇ ವಿನಾ ಅದಕ್ಕೆ ಬಲಿಪಶುವಾದ ಯುವಕನನ್ನಲ್ಲ.

-ಸುನೀಲ ನಾಯಕ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT