‘ಮತಾಂಧತೆಯ ವಿರೋಧದಲ್ಲೂ ಮತಾಂಧತೆ’ ಎಂಬ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಶೆಟ್ಟಿ ಅವರ ಲೇಖನವು (ಪ್ರ.ವಾ., ಆ.9) ಸಂವಾದಕ್ಕೆ ಸಂಬಂಧಿಸಿದ ವಿಷಯವನ್ನು ಎತ್ತಿ ಹೇಳಿದೆ. ದೇಶದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಎಡ-ಬಲಗಳ ನಡುವೆ ಗಂಭೀರ ಸಂವಾದವೇ ನಡೆದಿಲ್ಲವೆಂದೂ, ಅದೀಗ ನಡೆಯಬೇಕಿರುವ ತುರ್ತಿದೆ ಎಂದೂ ಹೇಳಿರುವುದು ಅತ್ಯಂತ ವಾಸ್ತವಿಕವಾದುದು. ಆದರೆ ಎಲ್ಲಿಂದ, ಹೇಗೆ ಸಂವಾದ ಶುರುವಾಗಬೇಕು ಎಂಬ ಪ್ರಶ್ನೆ ಹುಟ್ಟುತ್ತದೆ. ಅದು ‘ಸ್ನೇಹ’ದಿಂದ ಶುರುವಾಗಬೇಕು.