ಯಾರಾದರೂ ಪಕ್ಷ ಬಿಟ್ಟು ಹೋದಾಗ ಮೂಲ ಪಕ್ಷದವರು ಅವರನ್ನು ತೆಗಳುವುದು, ಪಕ್ಷ ಬಿಟ್ಟು ಹೋದವರು ತಾವು ಇದ್ದ ಪಕ್ಷವನ್ನು ಟೀಕಿಸುವುದು ಸಾಮಾನ್ಯವಾದ ವಿಷಯ. ಆದರೆ ಜಾತ್ಯತೀತ ಜನತಾದಳದಲ್ಲಿ ಹಾಗಲ್ಲ. ಹೋಗುವವರು ‘ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ. ಅವರ ಅನುಮತಿ ಪಡೆದು ಹೊರ ನಡೆದಿರುವೆ’ ಎನ್ನುತ್ತಾರೆ. ಅದೇ ರೀತಿಯಲ್ಲಿ ಕುಮಾರಸ್ವಾಮಿ ಅವರೂ ‘ಅವರಿಗೆ ಅಲ್ಲಿ ಉತ್ತಮ ಅವಕಾಶ ಇರಬಹುದು, ಹೋಗಿ ಎಂದೆ’ ಅನ್ನುತ್ತಾರೆ. ಸಾಮಾನ್ಯ ಜನರಿಗೆ ಇದೊಂದು ವಿಚಿತ್ರವಾಗಿ ಕಂಡರೆ ಅಚ್ಚರಿಯಿಲ್ಲ! ಇದು ಹೇಗೆ ಸಾಧ್ಯ, ಹೀಗೇ ಮುಂದುವರಿದರೆ ಇವರು ಪಕ್ಷ ಕಟ್ಟುವುದಾದರೂ ಹೇಗೆ ಎಂಬ ಪ್ರಶ್ನೆಗಳು
ಸಾರ್ವಜನಿಕರಲ್ಲಿ ಮೂಡಬಹುದು.