ಕರ್ನಾಟಕದ ನ್ಯಾಯಾಲಯಗಳು ಮಾದರಿಯಾಗಿರುವಂತೆ ಶ್ರಮಿಸುವುದಾಗಿ,ದೀನ ದಲಿತರಿಗೆ ನ್ಯಾಯಾಲಯವು ಎಟಕುವಂತೆ ಮಾಡುವುದಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಹೇಳಿದ್ದಾರೆ. ಯಾವ ವರ್ಗಕ್ಕೂ ಈಗ ನ್ಯಾಯಾಲಯ ಎಟುಕದ ಸ್ಥಳವಾಗಿಲ್ಲ. ಆದರೆ ಬಹಳಷ್ಟು ಜನ ಅವಶ್ಯಕತೆ ಇದ್ದರೂ ನ್ಯಾಯಾಲಯಕ್ಕೆ ಬರುವುದಿಲ್ಲ. ಕಾರಣ, ಅತಿ ವಿಳಂಬ ನ್ಯಾಯದಾನ. ಈ ಒಂದು ಸಮಸ್ಯೆಗೆ ಪರಿಹಾರ ದೊರೆತರೆ ಇದಕ್ಕಿಂತ ಇನ್ನೇನೂ ಬೇಕಿಲ್ಲ.