ಹಿಂದೆ ವಾರಾಂತ್ಯ ಕರ್ಫ್ಯೂ ವಿಧಿಸಿದ್ದಕ್ಕೂ ಈಗ ವಿಧಿಸಿರುವ ಲಾಕ್ಡೌನ್ಗೂ ಅಂತಹ ವ್ಯತ್ಯಾಸಗಳೇನೂ ಕಾಣಿಸುತ್ತಿಲ್ಲ. ತಳ್ಳುಗಾಡಿಗಳಲ್ಲಿ ತರಕಾರಿ, ಹಣ್ಣು ಮಾರಾಟ ಮಾಡಲು ಅವಕಾಶ ಮಾಡಿರುವುದೇನೊ ಸರಿಯಾಗಿದೆ. ಅದರಂತೆಯೇ ಆಯಾ ವಾರ್ಡ್ಗಳಿಗೆ ತಕ್ಕಂತೆ ಕಿರಾಣಿ ಸಾಮಾನುಗಳನ್ನೂ ಲಾರಿ ಅಥವಾ ಸರ್ಕಾರಿ ಬಸ್ಸುಗಳ ಮುಖಾಂತರ ಮನೆ ಬಾಗಿಲಿಗೆ ತಂದು ಮಾರಲು ಅವಕಾಶ ಕಲ್ಪಿಸಿದರೆ ಅದರಿಂದ ಜನ ತಮ್ಮ ತಮ್ಮ ಮನೆಯ ಮುಂದೆಯೇ ದಿನಸಿ ಸಾಮಾನುಗಳನ್ನು ಖರೀದಿಸಬಹುದು. ಇದರಿಂದ ಬೆಳಿಗ್ಗೆ 6ರಿಂದ 10 ಗಂಟೆಯವರೆಗಿನ ಅವಧಿಯಲ್ಲಿ ಸಾರ್ವಜನಿಕರು ವಸ್ತುಗಳನ್ನು ಖರೀದಿಸಲು ಗುಂಪುಗೂಡುವುದು ತಪ್ಪುತ್ತದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಲಿ.
–ಇಂದಿರಾ ಶ್ರೀಧರ್, ಮಳಲಕೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.