ಸದನದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ವರ್ತಿಸುತ್ತಿದ್ದ ಜನಪ್ರತಿನಿಧಿಗಳು, ಮೊನ್ನೆಯಂತೂ ತಾವೂ ಮಾತನಾಡಬೇಕು ಎಂದು ಅತಿ ಉತ್ಸಾಹ ತೋರಿ, ಚರ್ಚೆ– ಗದ್ದಲದಲ್ಲಿ ಪಾಲ್ಗೊಂಡಿದ್ದು ವಿಶೇಷ. ರಾಜ್ಯಪಾಲರ ಆದೇಶಕ್ಕೆ ಮನ್ನಣೆ ದೊರೆಯಲಿಲ್ಲ. ಒಟ್ಟಿನಲ್ಲಿ, ಪ್ರಜಾತಂತ್ರದ ಈ ಪ್ರಹಸನವನ್ನು, ಮೈತ್ರಿ ಸರ್ಕಾರದ ಹಗ್ಗಜಗ್ಗಾಟವನ್ನು ಪ್ರಜೆಗಳು ಅಸಹಾಯಕರಾಗಿ, ಮೂಕಪ್ರೇಕ್ಷಕರಾಗಿ ನೋಡಬೇಕಾಗಿ ಬಂದುದು ಪ್ರಜಾಪ್ರಭುತ್ವದ ದುರಂತ.