ವಿಧಾನಮಂಡಲ ಎಂದರೆ ದೇಗುಲ ಇದ್ದಂತೆ. ಅದು ಅತ್ಯಂತ ಪವಿತ್ರವಾದ ಸ್ಥಾನವೂ ಹೌದು ಎಂದು ನಂಬಿರುವ ರಾಜ್ಯದ ಪ್ರಜೆಗಳ ಮುಂದೆ ಈಗಿನ ಶಾಸಕರ, ಸಚಿವರ ವೈಯಕ್ತಿಕ ಚಾರಿತ್ರ್ಯಹರಣದ ಹೇಳಿಕೆಗಳು, ಪರಸ್ಪರ ತಿಕ್ಕಾಟಗಳು ಬಯಲಾಗುತ್ತಿವೆ. ಕಳೆದ ಒಂದು ವರ್ಷದಿಂದ ರಾಜ್ಯದ ಆರ್ಥಿಕ ವ್ಯವಸ್ಥೆ ನೆಲಕಚ್ಚಿದೆ, ಉದ್ಯೋಗ ಕಳೆದುಕೊಂಡು ಕುಳಿತಿದ್ದ ಅದೆಷ್ಟೋ ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ.