ಕನ್ನಡಿಗರ ಬಗ್ಗೆ ನಾವು ಹೆಮ್ಮೆಪಡುವ ‘ಸಜ್ಜನಿಕೆ’ ರಾಜಕೀಯ, ಧರ್ಮದ ಹೆಸರಲ್ಲಿ ನಡೆಯುತ್ತಿರುವ ಜಿದ್ದಾಜಿದ್ದಿಗಳಲ್ಲಿ ಪಾತಾಳ ತಲುಪಿರುವುದನ್ನು ಕಂಡರೆ ಭವಿಷ್ಯದಲ್ಲಿ ಸಂಭವಿಸಬಹುದಾದ ಅತಿರೇಕಗಳ ಬಗ್ಗೆ ಭಯವಾಗುತ್ತದೆ. ಈಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಹಸಿಹಸಿ ಸುಳ್ಳುಗಳನ್ನು, ಅವಹೇಳನಕಾರಿ ಬರಹಗಳನ್ನು, ಆತಂಕಕಾರಿ ಚಿಂತನೆಗಳನ್ನು ಪ್ರಚುರಪಡಿಸಲು ಬಳಕೆಯಾಗುತ್ತಿರುವುದು ಅತ್ಯಂತ ಆಘಾತಕಾರಿ.