ಒಂದೇ ವೇದಿಕೆಯನ್ನು ಹಂಚಿಕೊಂಡ ಬದ್ಧ ವೈರಿಗಳು ಗುರು–ಶಿಷ್ಯರಾಗಲು ಸಾಧ್ಯವೇ? ಇದರಲ್ಲಿ ಗುರು ಯಾರು, ಶಿಷ್ಯ ಯಾರು? ‘ಈ ಹಿಂದೆ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇವೆ. ಪರಸ್ಪರ ಹೋರಾಡಿದ್ದೇವೆ. ರಾಜ್ಯದ ಜನ ಮನ್ನಿಸಬೇಕು’ ಎಂದು ಗೌಡರು ಅಂಗಲಾಚುವುದನ್ನು ಸ್ವತಃ ಸಿದ್ದರಾಮಯ್ಯನವರೇ ನಂಬಲಾರರು. ‘ನಮ್ಮಪ್ಪನಾಣೆ ಜೆಡಿಎಸ್ ಅಧಿಕಾರಕ್ಕೆ ಬರೋಲ್ಲ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋಲ್ಲ...’ ಎಂದು ಹೇಳಿ ನೂರೊಂದು ಭಾಗ್ಯಗಳನ್ನು ಕಲ್ಪಿಸಿದರೂ ಮೂಲೆಗುಂಪಾದ ಸಿದ್ದರಾಮಯ್ಯ ಅವರಿಗೆ ಗೌಡರ ಚದುರಂಗದಾಟ ಅರ್ಥವಾಗದೆ ಇರಲಾರದು. ರಾಜ್ಯದ ರಾಜಕೀಯ ಪರಿಸ್ಥಿತಿಯೂ ಹಾಗೇ ಇದೆ. ಕಾರ್ಯವಾಸಿ ಕತ್ತೆ ಕಾಲು ಕಟ್ಟು ಎನ್ನುವಂತಾಗಿದೆ. ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ಎರಡೂ ಪಕ್ಷಗಳಿಗೆ ಇಲ್ಲ. ಅಂಗಲಾಚಿ ಎಷ್ಟೇ ಗುಂಪುಗಳು ಒಂದಾದರೂ ದೇಶಪ್ರೇಮಿ ‘ಚಾಯ್ವಾಲ’ ನನ್ನು ಮತದಾರ ಕೈ ಬಿಡಲಾರ ಎಂಬುದಂತೂ ಸತ್ಯ.