ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯ

Last Updated 19 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಗರ್ಭಿಣಿಯೊಬ್ಬರಿಗೆ ರಾತ್ರಿ ಹತ್ತು ಗಂಟೆ ಸಮಯದಲ್ಲಿ ವಿಶೇಷ ಮೆಟ್ರೊ ರೈಲಿನ ವ್ಯವಸ್ಥೆ ಮಾಡಿಕೊಟ್ಟ ಹೈದರಾಬಾದ್ ಮೆಟ್ರೊ ಅಧಿಕಾರಿಗಳ ನಡೆ ಅತ್ಯಂತ ಅಭಿನಂದನಾರ್ಹ. ಭಾರಿ ಮಳೆಯಿಂದ ಜಲಾವೃತವಾಗಿದ್ದ ರಸ್ತೆಗೆ ಯಾವುದೇ ವಾಹನ ಇಳಿಯದಿದ್ದರಿಂದ, ಮನೆಗೆ ತೆರಳುವ ಮಾರ್ಗ ತೋಚದೆ ಆ ಮಹಿಳೆ ಕಂಗಾಲಾಗಿದ್ದಾಗಿ ವರದಿಯಾಗಿದೆ. ಕೊರೊನಾ ಕಾರಣದಿಂದ ರಾತ್ರಿ 9 ಗಂಟೆವರೆಗೆ ಮಾತ್ರ ಮೆಟ್ರೊ ಸಂಚಾರ ಇರುತ್ತದೆ. ಆದರೂ ನಂತರ ಬಂದ ಮಹಿಳೆಯ ಮನವಿಗೆ ಅಧಿಕಾರಿಗಳು ಓಗೊಟ್ಟಿರುವುದು ಶ್ಲಾಘನೀಯ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಬಗ್ಗೆ ಅಹಿತಕರ ಸುದ್ದಿಗಳನ್ನೇ ಕೇಳುತ್ತಿರುವಾಗ, ಇಂತಹ ಅಪರೂಪದ ಘಟನೆಗಳು ಹೆಣ್ಣುಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ.

-ವಿಜಯಲಕ್ಷ್ಮಿ ಎನ್‌. ರೊಟ್ಟಿ, ಕುಷ್ಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT