ಲಕ್ಷಾಂತರ ಜನ ಸೇರುವಲ್ಲಿ ಚಿಕ್ಕಪುಟ್ಟ ಲೋಪಗಳಾಗುವುದು ಸಹಜ. ಆದರೆ ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ದೊಡ್ಡ ದೊಡ್ಡ ಲೋಪಗಳ ಸಂಖ್ಯೆಯೇ ಸಾಕಷ್ಟು ದೊಡ್ಡದಿತ್ತು. ಎಲ್ಲಕ್ಕಿಂತ ದೊಡ್ಡದೆಂದರೆ, ಮುಖ್ಯರಸ್ತೆಯ ನಟ್ಟನಡುವೆ ಕಿಲೊಮೀಟರ್ ಉದ್ದಕ್ಕೂ ಪುಸ್ತಕ, ಪತಾಕೆ, ಬಟ್ಟೆಯ ಸರಮಾಲೆಯೇ ಇದ್ದಾಗ, ಬೆಂಕಿ ಆರಿಸುವ ವ್ಯವಸ್ಥೆ ಎಲ್ಲೂ ಇರಲಿಲ್ಲ; ಅಗ್ನಿಶಾಮಕ ವಾಹನಗಳು ಧಾವಿಸಿ ಬರಲು ದಾರಿಯೂ ಇರಲಿಲ್ಲ.