ಸಚಿವರು ಮನೆಗೆ ಕರೆದಾಗ ಯಾವುದೇ ಅಧಿಕಾರಿ ಹೋಗದೇ ಇದ್ದರೆ, ನೀರು ನೆರಳು ಇಲ್ಲದ ಜಾಗಕ್ಕೆ ಎತ್ತಂಗಡಿ ಆಗುವುದಿಲ್ಲವೇ? ಹಿಂದೆ ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸಚಿವರಿಗೆ ಸರ್ಕಾರಿ ನೌಕರರ ಇಂತಹ ಸಂದಿಗ್ಧ ಸ್ಥಿತಿ ತಿಳಿಯಲಿಲ್ಲವೇ? ಈ ವಿಚಾರದಲ್ಲಿ ತಮ್ಮ ತಪ್ಪೂ ಇರುವುದರಿಂದ ಸಚಿವರು ಸಾರ್ವಜನಿಕವಾಗಿ ಕ್ಷಮೆ ಕೇಳಿ, ಟಿ.ಎಚ್.ಒ ಅಮಾನತನ್ನು ತಪ್ಪಿಸಬಹುದಿತ್ತಲ್ಲವೇ? ಒಟ್ಟಿನಲ್ಲಿ ಹಣ್ಣು ತಿಂದವ ತಪ್ಪಿಸಿಕೊಂಡ, ಸಿಪ್ಪೆ ತಿಂದವ ಸಿಗಾಕಿಕೊಂಡ ಅನ್ನುವ ಮಾತು ಈ ಪ್ರಕರಣಕ್ಕೆ ಚೆನ್ನಾಗಿ ಅನ್ವಯವಾಗುವಂತಿದೆ.