ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಕ್ರಮ ಅಗತ್ಯ

Last Updated 1 ಸೆಪ್ಟೆಂಬರ್ 2019, 18:21 IST
ಅಕ್ಷರ ಗಾತ್ರ

ಕೇರಳದ ಕಸಕ್ಕೆ ಮೈಸೂರಿನಲ್ಲಿ ಏಜೆಂಟರು ಸೃಷ್ಟಿಯಾಗಿ ಕಸದ ಮಾಫಿಯಾಕ್ಕೆ ಕಾರಣರಾಗಿರುವ ಸುದ್ದಿ (ಪ್ರ.ವಾ., ಆ. 29) ಬೇಸರ ಹುಟ್ಟಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಕಸ ವಿಲೇವಾರಿ
ಅತ್ಯಂತ ಗಂಭೀರ ಸ್ವರೂಪದ ಸಮಸ್ಯೆಯಾಗಿದೆ.

ಕೇರಳ ರಾಜ್ಯದ ಕಸವನ್ನು ತಂದು ನಮ್ಮ ರಾಜ್ಯದಲ್ಲಿ ವಿಲೇವಾರಿ ಮಾಡುವ ಏಜೆಂಟರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಊರಿನ ಜನರು ಏಜೆಂಟರ ಆಮಿಷಕ್ಕೆ ಬಲಿಯಾಗಬಾರದು. ಇಂಥವರ ಮಾಹಿತಿಯನ್ನು ಕೂಡಲೇ ಅಧಿಕಾರಿಗಳಿಗೆ ತಿಳಿಸಬೇಕು. ಜನ ಇನ್ನು ಮುಂದಾದರೂ ಎಚ್ಚೆತ್ತರೆ ಇಂತಹ ಸಮಸ್ಯೆಗಳನ್ನು ತಪ್ಪಿಸಬಹುದು.

ಹನುಮೇಶ ಹೆಗ್ಗಪೂರ್, ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT