‘ಅನುವಾದಿತ ಕನ್ನಡದ ವಿರಾಟ್ ರೂಪ!’ ಎಂಬ ಡಾ. ಜಿ.ಬೈರೇಗೌಡರ ಲೇಖನ (ಸಂಗತ, ಜುಲೈ 8) ಇಂದಿನ ಪೀಳಿಗೆಯ ಕನ್ನಡ ಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ. ಕನ್ನಡ ಕಲಿಯುವ ಬಗ್ಗೆ ಕಲಿಸುವವರಿಗೂ ಕಲಿಯುವವರಿಗೂ ನಿರುತ್ಸಾಹ ಇರುವುದು ಒಂದು ಕಡೆಯಾದರೆ, ಭಾಷೆಯ ಬಗ್ಗೆ ಪೋಷಕರು ತೋರುತ್ತಿರುವ ನಿರಾಸಕ್ತಿಯೂ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಅದರಲ್ಲೂ ಲೇಖನದಲ್ಲಿ ತಿಳಿಸಿರುವಂತೆ ಅಲ್ಪಪ್ರಾಣ, ಮಹಾಪ್ರಾಣ, ‘ಹ’ಕಾರ, ‘ಅ’ಕಾರಗಳಲ್ಲಿ ವ್ಯತ್ಯಾಸವಿಲ್ಲದೇ ನಾವು ಮಾಡುವ ಉಚ್ಚಾರಣೆ ಬರವಣಿ ಗೆಯಲ್ಲಿ ಪ್ರತಿಫಲಿಸುತ್ತದೆ.