ಕರ್ನಾಟಕದ ಮೈತ್ರಿ ಸರ್ಕಾರ ಇಷ್ಟೊಂದು ಅತಂತ್ರ ಸ್ಥಿತಿಯಲ್ಲಿ ಮುಂದುವರಿಯಬಹುದು ಎಂದು ರಾಜ್ಯದ ಜನರು ಭಾವಿಸಿರಲಾರರು. ಸರ್ಕಾರದ ಈಗಿನ ಸ್ಥಿತಿಯನ್ನು ನೋಡಿದರೆ, ಇದೊಂದು ಪ್ರಜಾರಾಜ್ಯದ ಸೋಲು ಎಂದು ಹೇಳಬಹುದಾಗಿದೆ. ಭಾವಪರವಶರಾದ ಮುಖ್ಯಮಂತ್ರಿಯ ಸಹನೆ ಮೀರಿದ ಮಾತುಗಳು, ವಿರೋಧ ಪಕ್ಷದವರ ಅಧಿಕಾರದ ದಾಹ, ಸಚಿವರಾಗಬೇಕೆಂಬ ಬಯಕೆಯ ಅತೃಪ್ತ ಶಾಸಕರ ಹೋರಾಟ, ಖಾತೆಗಳ ಹಂಚಿಕೆಯಲ್ಲಿ ಕಿತ್ತಾಟ... ಇವನ್ನೆಲ್ಲ ನೋಡಿ ರಾಜ್ಯದ ಜನ ರೋಸಿ ಹೋಗಿದ್ದಾರೆ. ರಾಜಕೀಯ ಸುದ್ದಿ ಕೇಳುವುದು ಹಾಗೂ ಓದುವುದು ‘ಅಲರ್ಜಿ’ಯಾಗಿ ಪರಿಣಮಿಸಿದೆ.