ಪೈಲಟ್ ಅಭಿನಂದನ್ ಬಿಡುಗಡೆಯಾಗಿರುವುದು ಎಲ್ಲ ಭಾರತೀಯರಿಗೂ ಸಂತೋಷ ತಂದಿದೆ. ಪಾಕಿಸ್ತಾನದ ನಾಗರಿಕರು ಕೂಡ ಇಸ್ಲಾಮಾಬಾದ್ನಲ್ಲಿ ‘ಯುದ್ಧ ಬೇಡ, ಶಾಂತಿ ನೆಲೆಸಲಿ’ ಎಂಬ ಫಲಕಗಳನ್ನು ಪ್ರದರ್ಶಿಸುತ್ತಾ ರ್ಯಾಲಿ ನಡೆಸಿದರು. ಇಷ್ಟಾದರೂ ಈ ಸಂಘರ್ಷಗಳು ಏಕೆ ನಡೆಯುತ್ತವೆ? ಪಾಕಿಸ್ತಾನ ಮತ್ತು ಭಾರತ ಎರಡು ಕಡೆಯೂ ಮತಾಂಧರು ಇದ್ದಾರೆ. ಇವರ ಕಾರಣದಿಂದ ಸಂಘರ್ಷದ ಸಂದರ್ಭಗಳು ಸೃಷ್ಟಿಯಾಗುತ್ತವೆ. ಧರ್ಮ ಮತ್ತು ದೇವರ ಅವಶ್ಯಕತೆ ಇರುವುದು ಶಾಂತಿ ಪಡೆಯುವುದಕ್ಕಾಗಿ. ಹೀಗಿರುವಾಗ, ಧರ್ಮದ ಹೆಸರಿನಲ್ಲಿ ಕ್ರೌರ್ಯ ನಡೆಯುತ್ತಿರುವುದು ದುರದೃಷ್ಟಕರ.