ಇಷ್ಟೊಂದು ಸಾಲದ ಹೊರೆ ಇಟ್ಟುಕೊಂಡು ಅನಗತ್ಯ ಕಾರ್ಯಕ್ರಮಗಳು ಹಾಗೂ ಜನ ಮೆಚ್ಚಿಸುವ ಯೋಜನೆಗಳ ಘೋಷಣೆ ಎಗ್ಗಿಲ್ಲದೆ ನಡೆದೇ ಇದೆ. ಕೊರೊನಾ ವೈರಸ್ ಕಾಟ ಮತ್ತು ಪ್ರವಾಹದಿಂದ ರಾಜ್ಯ ಮಾತ್ರವಲ್ಲದೆ ಇಡೀ ದೇಶವೇ ನಲುಗಿದೆ. ಅನೇಕ ಕಾರ್ಖಾನೆಗಳು ಮುಚ್ಚಿವೆ, ವ್ಯಾಪಾರ ವ್ಯವಹಾರ ಕುಸಿದಿದೆ, ಸಾವಿರಾರು ಯುವಕ ಯುವತಿಯರು ಕೆಲಸ ಕಳೆದುಕೊಂಡು ದಿಕ್ಕೆಟ್ಟು ಊರುಗಳನ್ನು ಸೇರಿದ್ದಾರೆ. ರೈತರು, ಕಾರ್ಮಿಕರ ಬವಣೆ ಹೇಳತೀರದು. ಇದೊಂದು ಗಂಭೀರ ಪರಿಸ್ಥಿತಿ.