ರಂಗಭೂಮಿಯನ್ನೇ ಬದುಕಾಗಿಸಿಕೊಂಡ ಸಾವಿರಾರು ರಂಗಕಲಾವಿದರು ರಾಜ್ಯದಲ್ಲಿ ಇದ್ದಾರೆ. ಜನಪದ ಕಲಾವಿದರು, ಹರಿಕಥಾ ಕಲಾವಿದರು, ಹಾಡುಗಾರರು, ವಾದ್ಯಗೋಷ್ಠಿಯವರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರು ಕೂಡ ದಿನಗೂಲಿ ನೌಕರರಂತೆ, ತಮ್ಮ ಉದರ ಪೋಷಣೆಗಾಗಿ ದಿನನಿತ್ಯದ ರಂಗ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ವೃತ್ತಿ ಹಾಗೂ ಹವ್ಯಾಸಿ ಕಲಾವಿದರು. ಈಗ ರಂಗ ಚಟುವಟಿಕೆಗಳು ಎಲ್ಲೆಡೆ ಸ್ಥಗಿತಗೊಂಡಿರುವುದರಿಂದ, ಈ ಕಲಾವಿದರ, ತಂತ್ರಜ್ಞರ, ಸಂಗೀತ ವಾದ್ಯ ವೃಂದದವರ ಜೀವನ
ಅತಂತ್ರವಾಗಿದೆ.