ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ಸರ್ಕಾರ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಜ. 17). ಸೀರೆ ಉಡಲಿಲ್ಲ, ಧೋತಿ ಉಡಲಿಲ್ಲ ಎಂಬ ಕಾರಣಕ್ಕೆ ದೇವಸ್ಥಾನಕ್ಕೆ ಬಂದವರನ್ನು ಹೊರಗೆ ನಿಲ್ಲಿಸುವುದು ಅತಿಥಿಗೆ ಮಾಡುವ ಅವಮಾನವೇ ಸರಿ. ಇದೂ ಪಂಕ್ತಿಭೇದಕ್ಕೆ ಸಮನಾದದ್ದು. ಅವರಿಗೆ ದೇವಸ್ಥಾನದ ವತಿಯಿಂದ ಉಚಿತವಾಗಿ ಅಥವಾ ಸಾಂಕೇತಿಕ ಮೌಲ್ಯ ಪಡೆದು ಸೀರೆ, ಪಂಚೆಗೆ ವ್ಯವಸ್ಥೆ ಮಾಡಿಕೊಡುವುದು ಒಳ್ಳೆಯದು. ಜೊತೆಗೆ, ಅವರು ತಾವು ಹಾಕಿರುವ ಬಟ್ಟೆಯ ಮೇಲೆಯೇ ಪಂಚೆ, ಸೀರೆ ಸುತ್ತಿಕೊಳ್ಳಲು ಅನುವು ಮಾಡಿಕೊಟ್ಟರೆ ಇನ್ನೂ ಒಳ್ಳೆಯದು.