ಭಟ್ಕಳದ ಜಾಮಿಯಾ ಮಸೀದಿ (ಚಿನ್ನದಪಳ್ಳಿ), ಖಲೀಫಾ ಜಾಮಿಯಾ ಮಸೀದಿ, ನವಾಯತ್ ಕಾಲೊನಿಯ ತಂಝೀಮ್ ಜುಮ್ಮಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಯಿತು. ಧರ್ಮಗುರುಗಳಾದ ಮೌಲಾನಾ ಅಬ್ದುಲ್ ಅಲೀಮ್ ಖತೀಬ್ ನದ್ವಿ, ಮೌಲಾನಾ ಖಾಝಾ ಅಕ್ರಮಿ ಮದನಿ, ಮೌಲಾನಾ ಅನ್ಸಾರ್ ಖತೀಬ್ ಮದನಿ ನಮಾಜ್ ಬೋಧಿಸಿದರು. ಉಪವಾಸ ವ್ರತಾಚರಣೆ ಹಾಗೂ ಈದ್ ಮಹತ್ವದ ಬಗ್ಗೆ ವಿವರಿಸಿದರು. ನಂತರ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.