ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಅಸಮಾನತೆ ಹಿಗ್ಗುತ್ತಿರುವುದು ಸರಿಯಲ್ಲ

Last Updated 21 ಜನವರಿ 2020, 20:00 IST
ಅಕ್ಷರ ಗಾತ್ರ

ಭಾರತದ 63 ಆಗರ್ಭ ಸಿರಿವಂತರ ಬಳಿ ಇರುವ ಸಂಪತ್ತು, ಕೇಂದ್ರ ಸರ್ಕಾರದ 2018-19ನೇ ಸಾಲಿನ ಬಜೆಟ್ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದ್ದು ಎಂಬ ಸುದ್ದಿಯನ್ನು ಓದಿ (ಪ್ರ.ವಾ., ಜ. 21) ಆಘಾತವಾಯಿತು. 130 ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆ ಇರುವ ಮತ್ತು ಬಡವರನ್ನೂ ಗಣನೀಯ ಪ್ರಮಾಣದಲ್ಲಿ ಹೊಂದಿರುವ ನಮ್ಮ ದೇಶದಲ್ಲಿನ ಈ ಪರಿ ಆರ್ಥಿಕ ಅಸಮಾನತೆ ವಿಷಾದನೀಯ.

ಈ ಕುಬೇರರ ಮನ ಕರಗಿ, ತಮ್ಮಲ್ಲಿನ ಲಕ್ಷ್ಮಿಯನ್ನು ದೇಶದ ಅಭಿವೃದ್ಧಿಗೆ, ಬಡವರ ಏಳಿಗೆಗೆ ಬಳಸುತ್ತಾರೆ ಎಂದು ಆಶಿಸೋಣವೇ? ಇಲ್ಲವೇ ಪ್ರಧಾನಿಯವರು ಕಟ್ಟುನಿಟ್ಟಿನ ಕ್ರಮಗಳ ಮೂಲಕ, ಈ ಆರ್ಥಿಕ ಅಸಮಾನತೆಯ ಪಿಡುಗನ್ನು ನಿವಾರಿಸುತ್ತಾರೆಂದು ನಿರೀಕ್ಷಿಸಬಹುದೇ?

–ಸಿ.ಪಿ.ಸಿದ್ಧಾಶ್ರಮ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT