‘ಸಮಸ್ಯೆ ಚಕ್ಕರ್ ಮಾತ್ರ ಅಲ್ಲ’ ಎಂಬ ಎಂ.ಜೆ.ರಾಜೀವಗೌಡ ಮೇಲೂರು ಅವರ ಲೇಖನಕ್ಕೆ (ಪ್ರ.ವಾ., ಸಂಗತ, ಫೆ. 15) ಪ್ರತಿಕ್ರಿಯೆ. ಲೇಖಕರು ಹೇಳಿರುವ ಹಲವು ಅಂಶಗಳು ಬಿಡಿಬಿಡಿಯಾಗಿ ನಿಜವಾಗಿದ್ದು, ಸಾಗರದಂತಿರುವ ಶೈಕ್ಷಣಿಕ ವ್ಯವಸ್ಥೆಯೊಳಗೆ ಇರುವ ಕೆಲವೇ ತಿಮಿಂಗಿಲಗಳಿಗೆ ಅನ್ವಯಿಸುತ್ತವೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕವಾಗಿ ದುಡಿಯುವ ಹಾಗೂ ಸೋಮಾರಿಗಳಾಗಿ ಕಾಲ ನೂಕುವ ಒಂದಷ್ಟು ನೌಕರ ವರ್ಗ ಇರುವುದಂತೂ ಸತ್ಯ. ಹಾಗೆಂದ ಮಾತ್ರಕ್ಕೆ ಯಾರೋ ಕೆಲವರನ್ನು ನೋಡಿ ಇಡೀ ವ್ಯವಸ್ಥೆಯೇ
ಕೆಟ್ಟುಹೋಗಿದೆಯೆಂದು ಸಾರ್ವತ್ರೀಕರಿಸುವುದು ಸರಿಯೆನಿಸುವುದಿಲ್ಲ.