ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ಆಕ್ಷೇಪಿಸಿರುವ ಶಾಂತಿನಾಥ ಕೆ. ಅವರ ವಾದವನ್ನು (ವಾ.ವಾ., ಜ. 7) ಒಪ್ಪಲಾಗದು. ಸಾಮಾನ್ಯವಾಗಿ ಆಹಾರ ಪದ್ಧತಿಯು ಅವರವರ ಮನೆಯ ಆಚಾರ ವಿಚಾರ, ಧಾರ್ಮಿಕ, ವೈಚಾರಿಕ ಸಂಸ್ಕೃತಿಗಳಿಗೆ ತಕ್ಕಂತೆ ಮಕ್ಕಳ ಮನಸ್ಸಿನಲ್ಲಿ ಮೈಗೂಡಿರುತ್ತದೆ. ಇದಕ್ಕೆ ಒಂದು ನಿದರ್ಶನವೆಂದರೆ, ನಾನು ಆರರಿಂದ ಹತ್ತನೆಯ ತರಗತಿಯವರೆಗೂ ಜವಾಹರ್ ನವೋದಯ ವಿದ್ಯಾಲಯದಲ್ಲಿ ಅಭ್ಯಸಿಸಿದ್ದು. ಅಲ್ಲಿ ಊಟದ ಸಮಯದಲ್ಲಿ ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡುತ್ತಿದ್ದರು. ಆದರೆ ನನ್ನ ಕೆಲವು ಸಸ್ಯಾಹಾರಿ ಸ್ನೇಹಿತರು, ಸಹಪಾಠಿಗಳು ಮಾತ್ರ ಶಿಕ್ಷಕರು, ಸ್ನೇಹಿತರು ಹೇಳಿದರೆಂದು ಅಥವಾ ನಾವು ಮೊಟ್ಟೆ ತಿನ್ನುವುದನ್ನು ನೋಡಿ ಪ್ರಚೋದನೆಗೊಂಡು ತಿನ್ನುವ ನಿರ್ಧಾರ ಮಾಡಲಿಲ್ಲ. ಅ ಒಡನಾಡಿಗಳು ಇಂದಿಗೂ ಸಸ್ಯಾಹಾರಿಗಳಾಗಿಯೇ ಉಳಿದಿದ್ದಾರೆ.