ಸರ್ಕಾರದ ಕಪಿಮುಷ್ಟಿಯಲ್ಲಿ ಅಡಗಿರುವ ಇಲಾಖೆಗಳು, ರಾಜಕಾರಣಿಗಳ ಕೃಪಾಕಟಾಕ್ಷಕ್ಕೆ ಪಾತ್ರರಾದ ಭ್ರಷ್ಟ ಅಧಿಕಾರಿ ವರ್ಗದಿಂದ ಪ್ರಜೆಗಳು ನ್ಯಾಯಸಮ್ಮತ ಚುನಾವಣೆಯನ್ನು ನಿರೀಕ್ಷಿಸಲು ಸಾಧ್ಯವೇ? ಇವರ ದರ್ಪ ಏನಿದ್ದರೂ ಬಡ ಪ್ರಜೆಗಳ ಮೇಲೇ ಹೊರತು ರಾಜಕಾರಣಿಗಳ ಮೇಲಲ್ಲ. ಹಿಡಿಯಬೇಕಾದವರನ್ನು ಬಿಟ್ಟು, ಬಿಡಬೇಕಾದವರನ್ನು ತಡೆದು ನಿಲ್ಲಿಸುವ ಗೋಳಿನ ಕಸರತ್ತನ್ನು ಕೊನೆಗಾಣಿಸಬೇಕಾಗಿದೆ.