ಕಾಂಗ್ರೆಸ್ ನಾಯಕತ್ವ ಸೋನಿಯಾ ಗಾಂಧಿಯವರದಾದರೂ ಪಕ್ಷವನ್ನು ಮುಷ್ಟಿಯಲ್ಲಿ ಹಿಡಿದಿರುವುದು ಪುತ್ರ ರಾಹುಲ್ ಗಾಂಧಿ. ಅವರ ಅನುಭವದ ಕೊರತೆಯಿಂದ, ಹೊಗಳುಭಟರ ಕೋಟೆಯಲ್ಲಿ ಸಿಲುಕಿರುವುದರಿಂದ ಪಕ್ಷ ಅನಾಥವಾಗುತ್ತಿದೆ. ಆಗಿನ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಅವರಿಗೂ ಇಂದಿನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೂ ಅಜಗಜಾಂತರವಿದೆ. ಪಕ್ಷದಲ್ಲಿ ಬಲಿಷ್ಠ ನಾಯಕರಿದ್ದರೂ ಹೊಗಳುಭಟರ ಭದ್ರಕೋಟೆಯಿಂದ ನಾಯಕತ್ವ ಹೊರಬರುವುದು ಅಸಾಧ್ಯವಾಗಿದೆ. ಇದನ್ನು ಹೇಳುವವರಿಗೂ ಕೇಳುವವರಿಗೂ ಆತ್ಮವಿಶ್ವಾಸ, ಛಲ ಇಲ್ಲದಿದ್ದರೆ, ಕೋಟೆ ಛಿದ್ರವಾಗುವುದನ್ನು ತಡೆಯಲು ಸಾಧ್ಯವೇ?