ದೇವಸ್ಥಾನದ, ಎ. ಟಿ. ಎಂ. ಗಳಲ್ಲಿನ ಯಾವುದೇ ಕಾವಲುಗಾರರ ಪ್ರಾಣ ರಕ್ಷಣೆಗೆ ಮಾಲೀಕರು ಒತ್ತು ನೀಡಬೇಕು. ಸತ್ತ ನಂತರ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವುದು ಎಷ್ಟು ಸರಿ?. ಹಣ ದೋಚಲು ಬಹಳಷ್ಟು ಕಾವಲುಗಾರರ ಕೊಲೆಗಳು ನಡೆಯುತ್ತಲೇ ಇರುತ್ತವೆ. ಹಾಗಿದ್ದರೂ ಅಮಾಯಕರ ಪ್ರಾಣ ರಕ್ಷಣೆಯ ವಿಚಾರದಲ್ಲಿ ಮಾತ್ರ ಸಂಭಂದಿಸಿದವರ ನಿರ್ಲಕ್ಷ್ಯ ಖಂಡನೀಯ. ದೇವಸ್ಥಾನದ ಆದಾಯ ಮಾತ್ರ ಸಾಕು, ಅವರವರ ಸಂಪತ್ತು ರಕ್ಷಿಸಿದರೆ ಸಾಕು ಎಂಬ ನೀತಿ ತರವಲ್ಲ, ಸಂಪತ್ತಿನ ರಕ್ಷಣೆಗೆ ಕೊಡುವ ಪ್ರಾಮುಖ್ಯತೆ ಅಮಾಯಕರ ಪ್ರಾಣ ರಕ್ಷಣೆಗೂ ಕೊಡಲಿ.
-ಮಂಜುನಾಥ್ ಜೈನ್ ಎಂ. ಪಿ, ಮಂಡ್ಯ