ಕೆಲವೇ ಜನರ ಲಾಭಕ್ಕಾಗಿ ಪ್ರಕೃತಿಯನ್ನು ನಾಶ ಮಾಡಿದರೆ, ಕೇರಳ, ಕೊಡಗಿನಲ್ಲಿ ಆದಂತೆ ಕುಸಿತ ಸಂಭವಿಸಿದರೆ ಅದನ್ನು ಸರಿಪಡಿಸಲು ಸಾಧ್ಯವೇ? ಈಗಾಗಲೇ ಬೆಟ್ಟದಲ್ಲಿ ಕುಸಿತ ಉಂಟಾಗಿದೆ. ರೋಪ್ವೇ ಹೆಸರಿನಲ್ಲಿ ನಡೆಸುವ ಯಾವುದೇ ಕಾಮಗಾರಿಯು ಬೆಟ್ಟದ ಪ್ರಕೃತಿಗೆ ಉರುಳಾಗಿ ಪರಿಣಮಿಸುತ್ತದೆ. ಹಾಗಾಗಿ ಈ ಯೋಜನೆಯನ್ನು ನಿಲ್ಲಿಸಬೇಕು.
-ಎಸ್.ರವಿ, ಮೈಸೂರು