‘ಸಮಾಜ ಕೆಟ್ಟಿಲ್ಲ: ಬದಲಾಗಲಿ ದೃಷ್ಟಿಕೋನ’ ಎಂಬ ಜಯಂತ್ ಕೆ.ಎಸ್. ಅವರ ಲೇಖನ (ಸಂಗತ, ಆ. 21) ಓದಿದಾಗ ‘ಕಾಲ ಕೆಟ್ಟಿತೆಂದು ಹೇಳುತ್ತಾರೆ. ಆದರೆ ಕಾಲ ಕೆಡದು, ಅದೇ ಸೂರ್ಯ– ಚಂದ್ರರು, ಅದೇ ಭೂಮಿ, ಅದೇ ಲೋಕ, ಅದೇ ಕಾಲ. ಆದರೆ ಕೆಡುವುದು ಜನರ ನಡೆ ನುಡಿ ಮಾತ್ರ’ ಎಂಬ ಸ್ವಾಮಿ ವಿವೇಕಾನಂದರ ಮಾತು ನೆನಪಾಯಿತು. ಎಷ್ಟೋ ವರ್ಷಗಳಿಂದಲೂ ಜೀವನ ಮೌಲ್ಯಗಳು ತಮ್ಮದೇ ಆದ ರೀತಿ ನೀತಿಯಲ್ಲಿ, ಚೌಕಟ್ಟಿನಲ್ಲಿ ಉಳಿಯುತ್ತಾ, ಬೆಳೆಯುತ್ತಾ ಬಂದಿವೆ.